Thursday, June 4, 2015

ಕಾದಿಹಳು ರುಕ್ಮಿಣಿ......


ಸ್ವಾತಿ ಭಟ್ ಅವರ ಕುಂಚಪ್ರಪಂಚದಲ್ಲಿ ಮೂಡಿದ ಚಿತ್ರ...'ಕೃಷ್ಣಾ ನೀ ಬೇಗನೇ ಬಾರೋ' .

ರುಕ್ಮಿಣಿಯು ಕಾದಿಹಳು ನಿನ್ನದೇ ದಾರಿಯನು
ಹಲವಾರು ಆಸೆಗಳ ಹೊತ್ತುಕೊಂಡು ||
ಕಣ್ಣಲ್ಲಿ ಕನಸುಗಳು ಮನದಲ್ಲಿ ಬಯಕೆಗಳು
ನೆನೆದಿಹಳು ಕರೆದೊಯ್ವೆ ಎಂದುಕೊಂಡು || ೧ ||

ನಿನ್ನದೇ ನಿರೀಕ್ಷೆ ಚಡಪಡಿಸುತಿಹಳವಳು
ಬಂದುಬಿಡು ನೀನಿಂದು ತಡಮಾಡದೆ ||
ಅವಳಣ್ಣ ರುಕ್ಮನಿಂದಾಕೆಯನು ರಕ್ಷಿಸಲು
ಓ ಹರಿಯೆ ನೀ ಬೇಗ ಬರಬಾರದೆ ? || ೨ ||


-ಸುರೇಖಾ ಭಟ್ ಭೀಮಗುಳಿ
30/05/2015

No comments:

Post a Comment