Saturday, October 31, 2015

" ಜೇನು ಮರಿಗೊಂದು ಶೋಕಗೀತೆ "

" ಜೇನು ಮರಿಗೊಂದು ಶೋಕಗೀತೆ "
*******************************
ಒಂದು ದಿನ ಜೇನು ಮರಿಯು
ಏನು ಮಾಡಿತು ? ||
ಮಧುವ ಹುಡುಕಲೆಂದು ಅದು
ಗೂಡು ಬಿಟ್ಟಿತು || ೧ ||

ಹೂವು ಹುಡುಕ ಹೊರಟ ಮರಿಗೆ
ಬೆಲ್ಲ ಕಂಡಿತು ||
ಅದರ ರುಚಿಯ ನೋಡ್ವ ಎಂದು
ನೆಕ್ಕಿ ನೋಡಿತು || ೨ ||

ನೊರೆಯ ಬೆಲ್ಲದಲ್ಲಿ ಕಾಲು
ಸಿಕ್ಕಿಕೊಂಡಿತು ||
ಕಷ್ಟಪಟ್ಟರೂನು ಹೊರಗೆ
ಬಾರದಾಯಿತು || ೩ ||

ಅಷ್ಟರೊಳಗೆ ನೊರೆಯ ಬೆಲ್ಲ
ಗಟ್ಟಿಯಾಯಿತು ||
ಬೆಲ್ಲದಚ್ಚಿನಲ್ಲಿ ಮರಿಯು
ಪ್ರಾಣ ಬಿಟ್ಟಿತು ! || ೪ ||

ಏನೋ ಮಾಡ ಹೋಗಿ ಅದುವು
ಏನೋ ಆಯಿತೆ ? ||
ನೊರೆಯ ಬೆಲ್ಲ ಆಸೆಗಾಗಿ
ಜೀವ ಹೋಯಿತೆ ? || ೫ ||

ಶೋಕಗೀತೆ ಬರೆವುದಕಿದು
ನಾಂದಿಯಾಯಿತೆ ?
ಸತ್ತ ಜೇನಿನಾತ್ಮಕಿಂದು
ಮುಕ್ತಿ ಸಿಕ್ಕಿತೆ ? || ೬ ||

- ಸುರೇಖಾ ಭೀಮಗುಳಿ
31/10/2015
ಚಿತ್ರ : Rajesh Srivatsa (ಕಾಜಾಣ - Kaajaana ಗ್ರೂಪ್)
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment