" ಅನಾನಾಸು ಸಂಭ್ರಮ !"
***********************
ಪೆರಿಯ ಶಾಂತಿಯ ಅನಾನಾಸದು
ನಮ್ಮ ಬಿಡದೇ ಸೆಳೆವುದು ||
ಎಷ್ಟು ತಿಂದರು ತೃಪ್ತಿಯಾಗದು
’ಹೀಗೆ ಯಾತಕೆ ?’ ತಿಳಿಯದು || ೧ ||
ಮಂಗಳೂರಿನ ಮುಖ್ಯ ರಸ್ತೆಯ
ಬಲಕೆ ತಿರುಗಿದ ಮಾರ್ಗವು ||
ಹಸಿರು ಕಾನನ ನೆರಳ ಪರಿಸರ
ಸುತ್ತ ಮಂಗನ ಆಟವು ! || ೨ ||
ಹಣ್ಣ ಸಿಪ್ಪೆಗೆ - ಕೊಳೆತ ಹಣ್ಣಿಗೆ
ಕಾದು ಕುಳಿತಿವೆ ಮರ್ಕಟ ||
ಮರದ ಮೇಲಿನ ಮಂಗನಾಟಕೆ
ಮರೆವ ಗ್ರಾಹಕ ಸಂಕಟ || ೩ ||
ಹಳದಿ ಹಣ್ಣಿಗೆ ಉಪ್ಪು ಖಾರಾ
ಹಣ್ಣ ತಟ್ಟೆಯು ಮೆರೆವುದು ||
ಬಾಯಿಗಿಟ್ಟರೆ ’ಇನ್ನು ಬೇಕೂ’
ಎಂದು ಮನವೂ ಬೇಡ್ವುದು || ೪ ||
ನಮಗು ಗೊತ್ತಿದೆ ಬಹಳ ತಿಂದರೆ
ದೇಹ ಉಷ್ಣವ ತಡೆಯದು ||
ಬಿಟ್ಟರುಂಟೇ ಇಂಥ ಸಂಭ್ರಮ ?
ಬೇಕು ಎಂದರು ಸಿಕ್ಕದು || ೫ ||
ನಾಲ್ಕೆ ಜನರೇ ಹತ್ತು ತಟ್ಟೆಯ
ತಿಂದು ತೇಗುತ ಬಂದೆವು ||
ಇಂದು ಮನೆಯಲಿ ಹಾಲು- ಮೆಂತ್ಯದ
ಬೊಂಡ ನೀರಿನ ಪಥ್ಯವು ! || ೬ ||
- ಸುರೇಖಾ ಭೀಮಗುಳಿ
03/11/2015.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ಶ್ಯಾಮ್ ಭೀಮಗುಳಿ ಮತ್ತು ಅನಾನಾಸು ಗಾಡಿ !
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
***********************
ಪೆರಿಯ ಶಾಂತಿಯ ಅನಾನಾಸದು
ನಮ್ಮ ಬಿಡದೇ ಸೆಳೆವುದು ||
ಎಷ್ಟು ತಿಂದರು ತೃಪ್ತಿಯಾಗದು
’ಹೀಗೆ ಯಾತಕೆ ?’ ತಿಳಿಯದು || ೧ ||
ಮಂಗಳೂರಿನ ಮುಖ್ಯ ರಸ್ತೆಯ
ಬಲಕೆ ತಿರುಗಿದ ಮಾರ್ಗವು ||
ಹಸಿರು ಕಾನನ ನೆರಳ ಪರಿಸರ
ಸುತ್ತ ಮಂಗನ ಆಟವು ! || ೨ ||
ಹಣ್ಣ ಸಿಪ್ಪೆಗೆ - ಕೊಳೆತ ಹಣ್ಣಿಗೆ
ಕಾದು ಕುಳಿತಿವೆ ಮರ್ಕಟ ||
ಮರದ ಮೇಲಿನ ಮಂಗನಾಟಕೆ
ಮರೆವ ಗ್ರಾಹಕ ಸಂಕಟ || ೩ ||
ಹಳದಿ ಹಣ್ಣಿಗೆ ಉಪ್ಪು ಖಾರಾ
ಹಣ್ಣ ತಟ್ಟೆಯು ಮೆರೆವುದು ||
ಬಾಯಿಗಿಟ್ಟರೆ ’ಇನ್ನು ಬೇಕೂ’
ಎಂದು ಮನವೂ ಬೇಡ್ವುದು || ೪ ||
ನಮಗು ಗೊತ್ತಿದೆ ಬಹಳ ತಿಂದರೆ
ದೇಹ ಉಷ್ಣವ ತಡೆಯದು ||
ಬಿಟ್ಟರುಂಟೇ ಇಂಥ ಸಂಭ್ರಮ ?
ಬೇಕು ಎಂದರು ಸಿಕ್ಕದು || ೫ ||
ನಾಲ್ಕೆ ಜನರೇ ಹತ್ತು ತಟ್ಟೆಯ
ತಿಂದು ತೇಗುತ ಬಂದೆವು ||
ಇಂದು ಮನೆಯಲಿ ಹಾಲು- ಮೆಂತ್ಯದ
ಬೊಂಡ ನೀರಿನ ಪಥ್ಯವು ! || ೬ ||
- ಸುರೇಖಾ ಭೀಮಗುಳಿ
03/11/2015.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ಶ್ಯಾಮ್ ಭೀಮಗುಳಿ ಮತ್ತು ಅನಾನಾಸು ಗಾಡಿ !
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
No comments:
Post a Comment