ಹೊರಟಿರುವ ಯಾತ್ರೆಯಿದು ರಾಮ-ಕೃಷ್ಣರ ಜೊತೆಗೆ
ನಾಳೆಯಾ ಚಿಂತೆ ನನ್ನಲ್ಲಿ ಇಲ್ಲ. ||
ಬಂಧನವ ಕಳೆವ ನಿಜ ಅಂಬಿಗನೆ ಜೊತೆಯಿರಲು
ಚಂದದಲಿ ಕಾಯುವನು ಆತಂಕ ಸಲ್ಲ. || 2 ||
ನೋವಿಹುದು ನಲಿವಿಹುದು ಚೆಲ್ಲಾಟವಿಹುದಿಲ್ಲಿ
ಹೊಡೆದಾಟ ಬಡಿದಾಟ ಎಲ್ಲ ಇಹುದು ||
ಬಿಚ್ಚಿಡಲು ಹೊರಟಿರುವೆ ಸತ್ವವಿಹ ಸರಮಾಲೆ
ನೀವುಗಳು ನನ್ನ ಜೊತೆ ಸೇರಬಹುದು ||3||
ಹೊರಟಿರುವೆ ನಾನಿಂದು ಹಿಮ್ಮುಖದ ದಾರಿಯಲಿ
ಬರುವಿರಾ ಜೊತೆಯಲ್ಲಿ ನಾಲ್ಕು ಹೆಜ್ಜೆ ||
ನಮ್ಮ ಪಯಣವು ನಿತ್ಯ ರಾಮ-ಕೃಷ್ಣರ ಜೊತೆಗೆ
ಕುಣಿಯೋಣ ಬನ್ನಿರೈ ಕಟ್ಟಿ ಗೆಜ್ಜೆ ! ||4||
ಸುರೇಖಾ ಭಟ್, ಭೀಮಗುಳಿ
17.01.2015
ನಾಳೆಯಾ ಚಿಂತೆ ನನ್ನಲ್ಲಿ ಇಲ್ಲ. ||
ಬಂಧನವ ಕಳೆವ ನಿಜ ಅಂಬಿಗನೆ ಜೊತೆಯಿರಲು
ಚಂದದಲಿ ಕಾಯುವನು ಆತಂಕ ಸಲ್ಲ. || 2 ||
ನೋವಿಹುದು ನಲಿವಿಹುದು ಚೆಲ್ಲಾಟವಿಹುದಿಲ್ಲಿ
ಹೊಡೆದಾಟ ಬಡಿದಾಟ ಎಲ್ಲ ಇಹುದು ||
ಬಿಚ್ಚಿಡಲು ಹೊರಟಿರುವೆ ಸತ್ವವಿಹ ಸರಮಾಲೆ
ನೀವುಗಳು ನನ್ನ ಜೊತೆ ಸೇರಬಹುದು ||3||
ಹೊರಟಿರುವೆ ನಾನಿಂದು ಹಿಮ್ಮುಖದ ದಾರಿಯಲಿ
ಬರುವಿರಾ ಜೊತೆಯಲ್ಲಿ ನಾಲ್ಕು ಹೆಜ್ಜೆ ||
ನಮ್ಮ ಪಯಣವು ನಿತ್ಯ ರಾಮ-ಕೃಷ್ಣರ ಜೊತೆಗೆ
ಕುಣಿಯೋಣ ಬನ್ನಿರೈ ಕಟ್ಟಿ ಗೆಜ್ಜೆ ! ||4||
ಸುರೇಖಾ ಭಟ್, ಭೀಮಗುಳಿ
17.01.2015
No comments:
Post a Comment