ಚೌಪದಿಯ ರೀತಿಯಲಿ ಬರೆಯಹೊರಟಿಹೆ ನಾನು
ಕುತ್ತಿಗೆಗೆ ಕೈ ಹಾಕಿ ದಬ್ಬಬೇಡಿ ||
ಪ್ರಾಸ ಕೂಡಿಸುವಲ್ಲಿ ಮೋಸವಾದರು ಒಮ್ಮೆ
ಇವಳೇಕೆ ಹೀಗೆಂದು ಬೈಯ್ಯಬೇಡಿ || 1 ||
ನನ್ನ ಕವಿತ್ವವನು ಕಪಿತ್ವವೆಂದೆನಬೇಡಿ
ಕಪಿಶ್ರೇಷ್ಠ ಹನುಮಂತ ನನ್ನ ಪಕ್ಷದಲಿಹನು
ಗೊತ್ತಿಲ್ಲದವರುಂಟೆ ಅವನ ಮಹಿಮೆ ||2||
ಕಗ್ಗದಾ ಸವಿಯನ್ನು ಅರೆದು ಕುಡಿದಿಹೆ ನಾನು
ನೆತ್ತಿಗೇರುವುದೇನು ಕುಡಿದ ಅಮಲು ||
ಪದ್ಯದಾ ಮಧ್ಯದಲಿ ಗುಂಡಪ್ಪ ಇಣುಕಿದರೆ
ಬಂದರೂ ಬರಬಹುದು ಕಗ್ಗ ಘಮಲು ||3||
ಪದ್ಯಗಳ ಗುಂಗಿನಲಿ ಕಳೆದುಹೋಗಿಹೆ ನಾನು
ಕುಂತಲ್ಲಿ ನಿಂತಲ್ಲಿ ಹೊಳೆವ ಸಾಲು ||
ನನ್ನ ಬರೆ ನನ್ನ ಬರೆ ಎಂದು ಕಾಡಿವೆ ನೋಡಿ
ಹಿಡಿದೆಳೆಯುತಿವೆಯಲ್ಲ ನನ್ನ ಕಾಲು ! ||4||
-ಸುರೇಖಾ ಭಟ್, ಭೀಮಗುಳಿ
16.01.2015
No comments:
Post a Comment