Tuesday, July 21, 2015

" ವರುಣದೇವನಿಗೊಂದು ಸಲಹೆ "


ಕಾರ್ಮೋಡ ಮುಸುಕಿತೇ ಮಲೆನಾಡಿನ ಪರಿಸರವ ?
ಹೊರನೋಟವೆಲ್ಲವೂ ಮಸುಕು ಮಸುಕು ||
ಮಳೆರಾಯ ಆವರಿಸಿ ಬಿಗಿದಪ್ಪಿ ಕುಳಿತಿಹನೆ ?
ಸಂಕಟಕೆ ಸಿಕ್ಕಿದೆಯೆ ನಿಮ್ಮ ಬದುಕು ? || 1 ||

ಮಳೆಧಾರೆ ಸುರಿಯುತಿರೆ ರವಿಯು ಮುಷ್ಕರ ಹೂಡೆ
ಆಯ್ತು ಜನ ಜೀವನವು ಅಸ್ತವ್ಯಸ್ತ |
ನಾಲ್ಕು ದಿನ ಕಳೆಯಲಿ - ಹದಗೊಳಲಿ ಪರಿಸ್ಥಿತಿ
ಮಲೆನಾಡ ಜೀವನವೆ ಅತಿ ಪ್ರಶಸ್ತ ! || 2 ||

ಮಳೆಗಾಗಿ ಪರಿತಪಿಸಿ ಕಂಗಾಲು ಆಗಿಹರು
ಬಯಲುಸೀಮೆಯ ಜನರು ಗೊತ್ತೆ ಸ್ವಾಮಿ ? |
ಮಳೆಯಿಲ್ಲ ಬೆಳೆಯಿಲ್ಲ ನೆಲದಲ್ಲಿ ತಂಪಿಲ್ಲ
ಒಣಗಿ ನಿಂತಿಹುದಲ್ಲ ಅವರ ಭೂಮಿ || 3 ||

ಶುದ್ಧ ಗಾಳಿಯ ಹರವು - ಸ್ವಚ್ಛ ನೀರಿನ ಸೆಳವು
ಪ್ರಕೃತಿಯ ಕೃಪೆಯಿಹುದು ಮಲೆನಾಡಿನಲ್ಲಿ ||
ವರುಣದೇವನಿಗೊಂದು ಸಲಹೆಯನು ಕೊಟ್ಟುಬಿಡಿ 
ಸುರಿಯಬಾರದೆ ಬಯಲು ಸೀಮೆಯಲ್ಲಿ ? || 4 ||

- ಸುರೇಖಾ ಭಟ್ ಭೀಮಗುಳಿ
21/07/2015

No comments:

Post a Comment