(ಇಂದು ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ನಮ್ಮ ಬಡಾವಣೆಯಲ್ಲಿ ಒಂದು ಚಂದದ ಮಳೆ... ಹಾಗಾಗಿ ಇಂದಿನ ಯುಗಾದಿ ಕವನದಲ್ಲಿ ಮಳೆಗೂ ಒಂದು ಸ್ಥಾನ ! )
ಬೆಳಗಿನ ಜಾವದ ತಂಪನೆ ಮಳೆಯೂ
ವರುಣನ ಸ್ವಾಗತ ಯುಗಾದಿಗೆ ||
ದುರ್ಮುಖ ನಾಮದ ಸಂವತ್ಸರಕೇ
ಶುಭಾಶಯವಂತೆ ಸರ್ವರಿಗೆ || ೧ ||
ದಿನದಿಂದಿನಕೇ ಸೆಖೆ ಏರಿಹುದೂ
ದಿನಕರ ಉರಿದಿಹ ಬಾನಲ್ಲಿ ||
ವರುಣಾಗಮನಕೆ ಕಾಯುತಲಿದ್ದೆವು
ಪ್ರಾರ್ಥನೆ ಸಲ್ಲಿಸಿ ಮನದಲ್ಲಿ || ೨ ||
ತಣ್ಣತಣ್ಣಗಿನ ಹನಿಯುದುರಿದವೋ
ಇಳೆಯಾಯಸವದು ಪರಿಹಾರ ||
ಮಣ್ಣಿನ ವಾಸನೆ ಸುತ್ತಲು ಹರಡಲು
ಪರಿಸರ ಘಮಘಮ ಮಾದಕರ || ೩ ||
ಹೊಸವರ್ಷದಲೀ ಹರುಷವು ಉಕ್ಕಲಿ
ಶುಭವಾಗಲಿ ನಿಮಗೆಂದೆಂದು ||
ಕಹಿ ಕಾಡದಲೇ ಸಿಹಿ-ಸಿರಿಯುಕ್ಕಲಿ
ನನ್ನಯ ಆಶಯ ನಿಮಗಿಂದು || ೪ ||
- ಸುರೇಖಾ ಭೀಮಗುಳಿ
08/04/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಬೆಳಗಿನ ಜಾವದ ತಂಪನೆ ಮಳೆಯೂ
ವರುಣನ ಸ್ವಾಗತ ಯುಗಾದಿಗೆ ||
ದುರ್ಮುಖ ನಾಮದ ಸಂವತ್ಸರಕೇ
ಶುಭಾಶಯವಂತೆ ಸರ್ವರಿಗೆ || ೧ ||
ದಿನದಿಂದಿನಕೇ ಸೆಖೆ ಏರಿಹುದೂ
ದಿನಕರ ಉರಿದಿಹ ಬಾನಲ್ಲಿ ||
ವರುಣಾಗಮನಕೆ ಕಾಯುತಲಿದ್ದೆವು
ಪ್ರಾರ್ಥನೆ ಸಲ್ಲಿಸಿ ಮನದಲ್ಲಿ || ೨ ||
ತಣ್ಣತಣ್ಣಗಿನ ಹನಿಯುದುರಿದವೋ
ಇಳೆಯಾಯಸವದು ಪರಿಹಾರ ||
ಮಣ್ಣಿನ ವಾಸನೆ ಸುತ್ತಲು ಹರಡಲು
ಪರಿಸರ ಘಮಘಮ ಮಾದಕರ || ೩ ||
ಹೊಸವರ್ಷದಲೀ ಹರುಷವು ಉಕ್ಕಲಿ
ಶುಭವಾಗಲಿ ನಿಮಗೆಂದೆಂದು ||
ಕಹಿ ಕಾಡದಲೇ ಸಿಹಿ-ಸಿರಿಯುಕ್ಕಲಿ
ನನ್ನಯ ಆಶಯ ನಿಮಗಿಂದು || ೪ ||
- ಸುರೇಖಾ ಭೀಮಗುಳಿ
08/04/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
No comments:
Post a Comment