ಹಿರಿಯತನವನು ನಾವು ಒಪ್ಪಿಕೊಳದಿರಬೇಕೆ ?
ಯೌವ್ವನದ ಕಳೆಯಲ್ಲಿ ಮೆರೆಯವೇಕೆ ? ||
ಕೃತಕತೆಯ ಸೋಗಿನಲಿ ಕಳೆದು ಹೋಗಲೆ ಬೇಕೆ ?
ದೇವರಿಟ್ಟಂತೆ ನಾವ್ ಇದ್ದು ಬಿಡಬೇಕೆ ? || ೧ ||
ಕಪಟ ನಟನೆಯು ಏಕೆ ? ಹುಂಬತನ ನಮಗೇಕೆ ?
ಇದ್ದರಾಗದೆ ನಾವು ಇದ್ದ ಹಾಗೆ ? ||
ಶುಭಗಿ ನಾನೇ ಎಂಬ ಮುಖವಾಡ ಕಿತ್ತೊಗೆದು
ಇದ್ದು ಬಿಡುವೆನು ನಾನು ನನ್ನ ಹಾಗೆ || ೨ ||
ಬಿಡಿಸಿ ನಾ ಇಟ್ಟಿರುವೆ ಮನದ ಪದರುಗಳನ್ನು
ಬಿಡುಬೀಸು ಜೀವನವು ಇನ್ನು ಮುಂದೆ ||
ಬದುಕಿದ್ದು ಬಿಡಲಿನ್ನು ತೆರೆದ ಪುಸ್ತಕದಂತೆ
ಕದ್ದು ಮುಚ್ಚಿದ ಕಥೆಯು ಬೇಡ ತಂದೆ || ೩ ||
ಜಗದೆದುರು ತೆರೆದಿರುವೆ ಕಹಿಸಿಹಿಗಳೆಲ್ಲವನು
ನಾನು ಈ ಕ್ಷಣದಲ್ಲಿ ಖಾಲಿ ಖಾಲಿ ||
ಹೃದಯ ಸಿಂಹಾಸನದಲ್ಲಿ ಪವಡಿಸಿಹ ಪರಮಾತ್ಮ
ಅವನೆ ಇನ್ಮುಂದೆ ಈ ಮನದ ಮಾಲಿ || ೪ ||
- ಸುರೇಖಾ ಭೀಮಗುಳಿ
28/03/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಯೌವ್ವನದ ಕಳೆಯಲ್ಲಿ ಮೆರೆಯವೇಕೆ ? ||
ಕೃತಕತೆಯ ಸೋಗಿನಲಿ ಕಳೆದು ಹೋಗಲೆ ಬೇಕೆ ?
ದೇವರಿಟ್ಟಂತೆ ನಾವ್ ಇದ್ದು ಬಿಡಬೇಕೆ ? || ೧ ||
ಕಪಟ ನಟನೆಯು ಏಕೆ ? ಹುಂಬತನ ನಮಗೇಕೆ ?
ಇದ್ದರಾಗದೆ ನಾವು ಇದ್ದ ಹಾಗೆ ? ||
ಶುಭಗಿ ನಾನೇ ಎಂಬ ಮುಖವಾಡ ಕಿತ್ತೊಗೆದು
ಇದ್ದು ಬಿಡುವೆನು ನಾನು ನನ್ನ ಹಾಗೆ || ೨ ||
ಬಿಡಿಸಿ ನಾ ಇಟ್ಟಿರುವೆ ಮನದ ಪದರುಗಳನ್ನು
ಬಿಡುಬೀಸು ಜೀವನವು ಇನ್ನು ಮುಂದೆ ||
ಬದುಕಿದ್ದು ಬಿಡಲಿನ್ನು ತೆರೆದ ಪುಸ್ತಕದಂತೆ
ಕದ್ದು ಮುಚ್ಚಿದ ಕಥೆಯು ಬೇಡ ತಂದೆ || ೩ ||
ಜಗದೆದುರು ತೆರೆದಿರುವೆ ಕಹಿಸಿಹಿಗಳೆಲ್ಲವನು
ನಾನು ಈ ಕ್ಷಣದಲ್ಲಿ ಖಾಲಿ ಖಾಲಿ ||
ಹೃದಯ ಸಿಂಹಾಸನದಲ್ಲಿ ಪವಡಿಸಿಹ ಪರಮಾತ್ಮ
ಅವನೆ ಇನ್ಮುಂದೆ ಈ ಮನದ ಮಾಲಿ || ೪ ||
- ಸುರೇಖಾ ಭೀಮಗುಳಿ
28/03/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
No comments:
Post a Comment