Tuesday, April 12, 2016

" ವಿಪಶ್ಯನ ಧ್ಯಾನದ ಗುಂಗಿನಲ್ಲಿ "

ಬುದ್ಧನ ಧ್ಯಾನ ಕ್ರಮವಾದ ವಿಪಶ್ಯನ ಧ್ಯಾನ ತರಗತಿಗಾಗಿ ಬೆಂಗಳೂರು ಉತ್ತರದಲ್ಲಿರುವ ದಾಸನಪುರ ಹೋಬಳಿಯ ಮಾಕಳಿ ಎಂಬ ಊರಿನ ಧ್ಯಾನಕೇಂದ್ರಕ್ಕೆ ಹೊರಟು ನಿಂತಿದ್ದೇನೆ. ಹತ್ತು ದಿನದ ಹಠಮೌನ, ಮಿತ ಆಹಾರ, ಶಿಸ್ತಿನ ದಿನಚರಿ ... ಹಲವು ಅನುಭವಗಳಿಗೆ ತೆರೆದುಕೊಳ್ಳುವುದಕ್ಕೋಸ್ಕರ................ ( 13/04/2016 ರ ಮಧ್ಯಾನ್ಹದಿಂದ 24/04/2016 ರ ಬೆಳಗಿನವರೆಗೆ  )

ಹೊರಟಿರುವೆ ನಾ ನಾಳೆ ವಿಪಶ್ಯನ ಧ್ಯಾನಕ್ಕೆ
ಅನುಭವದ ಹೊಸ ಮಜಲ ಅರಿಯುವುದಕೆ ||
ಪೆನ್ನು ಪುಸ್ತಕವಿಲ್ಲ ಓದಿ ಬರೆವಂತಿಲ್ಲ
ದಶದಿನದ ತಪವನ್ನು ಗೈಯ್ಯುವುದಕೆ || ೧ ||

ದಿನಕೊಂದೆ ಬಿಸಿಊಟ ಮತ್ತೆ ಮಿತ ಉಪಹಾರ
ಹೇಗೆ ಸಹಿಸಲಿ ನಾನು ಹಸಿವೆಯನ್ನು ? ||
ಜೀವನದಲೊಮ್ಮೆಯೂ ಉಪವಾಸ ಮಾಡಿಲ್ಲ
ಹೊರಳಾಡಿ ಕಳೆಯಲೇ ರಾತ್ರಿಯನ್ನು ? || ೨ ||

ದಶದಿನದ ಮೌನದಲಿ ಮಾತು ಮರೆಯುವುದಂತೆ
ನನ್ನಿಂದ ಸಾಧ್ಯವೇ ಹಠದ ಮೌನ ? ||
ಅಸಾಧ್ಯ ಯಾವುದಿದೆ ? ಪರಿಕಿಸಿಯೆ ಬಿಡುವೆ ನಾ
ಹೊಸತಕ್ಕೆ ಒಡ್ಡುವೆನು ನನ್ನನ್ನು ನ || ೩ ||

ವಾಟ್ಸಪ್ಪು ಫೇಸ್ಬುಕ್ಕು ಚರವಾಣಿ ಸ್ಥಿರವಾಣಿ
ಎಲ್ಲ ಬಂಧನದಿಂದ ದೂರ ದೂರ ||
ಹೇಗೆ ಕಳೆಯಿತು ನನ್ನ ದಶದಿನದ ದಿನಚರಿಯು
ಹಂಚುವೆನು ನಿಮ್ಮೊಡನೆ ಅದರ ಸಾರ || ೪ ||

- ಸುರೇಖಾ ಭೀಮಗುಳಿ
12/04/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment