ಕವನಗಳ ಲೋಕದಲಿ ಸಂಚರಿಸಿ ನೋಡಿದರೆ
ಜಗಣ ಗುರು ಛಂದಸ್ಸಿನಂದ ತಿಳಿಯುವುದು ||
ಹೊಳೆಯ ನೀರಲಿ ಇಳಿದು ಕೈಕಾಲುಬಡಿಯದಿರೆ
ಈಜೆಂಬ ವಿದ್ಯೆಯನು ಹೇಗೆ ಕಲಿಯುವುದು ? || 1 ||
ಒಮ್ಮೆ ಕಲಿತರೆ ವಿದ್ಯೆ, ಬಿಟ್ಟರೂ ಬಿಡದೆಮ್ಮೆ
ತಾನ್ತಾನೆ ಛಂದಸ್ಸು, ಅಂದ ತೋರುವುದು ||
ಕೈಕಾಲುಗಳ ಕಟ್ಟಿ ನೀರಿನಲ್ಲೆಸೆದರೂ
ಮನಮಾಡೆ ತಕ್ಷಣದಿ ಬದುಕಿ ಬರಬಹುದು || 2 ||
ಅತಿಯಲ್ಲದಾ ವಿದ್ಯೆ, ಮಿತಿಯಲ್ಲಿನಾ ಜ್ಞಾನ
ಹದದಲ್ಲಿ ಇವೆಯಲ್ಲ ಪದದ ಸಂಪತ್ತು ||
ಮನಸಿಟ್ಟು ಬರೆಯುವೆನು ಮನದ ಭಾವವನೆಲ್ಲ
ನನ್ನಿಂದ ಬರದಿರಲಿ ಕವನಕಾಪತ್ತು || 3 ||
- ಸುರೇಖಾ ಭಟ್, ಭೀಮಗುಳಿ
19/05/2015