Wednesday, December 2, 2015

" ಚೆನ್ನೈನಲ್ಲಿ ಸುರಿಯುತ್ತಿರುವ ವರುಣದೇವನಿಗೊಂದು ಬಿನ್ನಹ...."


ಆ ತಾಯ* ದಾಹವದು ತೀರಿದರೆ ಸಾಕಿತ್ತು
ಇಡಿಯ ರಾಜ್ಯವೆ ನೀರು ಕುಡಿಯುತಿದೆ ಯಾಕೆ ? ||
ಊರಿಗೂರೆ ಮುಳುಗಿ ನಡುಗುತಿದೆ ನೋಡಿದಿರಾ ?
ಮುಗ್ಧ ಜನತೆಯ ಮೇಲೆ ಪ್ರಕೃತಿಯ ಕೇಕೆ  || ೧ ||

ಮೇಘದಬ್ಬರ ನಿಲಿಸು ಕರುಣೆ ಮಳೆಯನು ಸುರಿಸು
ಇನ್ನಾದರೂ ಒಳಿತು ಬುದ್ಧಿ ಬರಲಿ ||
ನಮಗೆ ನೀರಿರದಿರೆ ಕಿತ್ತು ಕೇಳದೆ ಇರಲಿ
ಕಾವೇರಿಗಾಗಿ ಹಠ ಹಿಡಿಯದಿರಲಿ || ೨ ||

ತನ ತಾಯ ಪುಣ್ಯದಲಿ ಮಕ್ಕಳಿಗು ಪಾಲುಂಟೆ ?
ಪಾಪದಲ್ಲಿಯು ಪಾಲು ಅನಿವಾರ್ಯವೇ ? ||
ಪಾಪವೋ ? ಪುಣ್ಯವೋ ? ಹಳೆಯ ಕರ್ಮದ ಫಲವೊ ?
ಮಕ್ಕಳಿಗೆ ಈ ಶಿಕ್ಷೆ  ಸರಿಯೆ ದೊರೆಯೆ ? || ೩ ||

- ಸುರೇಖಾ ಭೀಮಗುಳಿ
03/12/2015
ಚಿತ್ರಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

*ಆ ತಾಯ = ತಮಿಳಮ್ಮ...

No comments:

Post a Comment